By Village Missionary Movement
Sunday, 25-Apr-2021ಧೈನಂದಿನ ಧ್ಯಾನ(Kannada) – 25.04.2021 (Kids Special)
ಎಲ್ಲವನ್ನು ಮಾಡುವವರು
"ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು;..." - ಕೀರ್ತನೆಗಳು 138:8
ಹೇಯ್ Sixಸರ್ ಹೊಡೆದು ಬಿಟ್ಟ super ಎಂದು ಶಬ್ದ ಮಾಡಿ ಜಾಲಿಯಾಗಿ ಆಟವಾಡುತ್ತಿದ್ದನು ರಾಬರ್ಟ್. ಕ್ರಿಕೆಟ್ ಆಟ, boysಗೆ ತುಂಬಾ ಇಷ್ಟಾ ತಾನೆ! ಶರಣ್ ಹಾಗೂ ರಾಬರ್ಟ್ ಪಕ್ಕದ ಮನೆಯ ಸ್ನೇಹಿತರು. ಶರಣ್ ಬಡ ಕುಟುಂಬಕ್ಕೆ ಸೇರಿದವನು. Sunday schoolಗೆ ಆಸೆಯಿಂದ ಹೋಗುತ್ತಾನೆ. ಅಪ್ಪ ಮನೆಯಲ್ಲಿ ಕುಡಿದು ಬಿಟ್ಟು ಸಮಸ್ಯೆ ಮಾಡುತ್ತಲೇ ಇರುತ್ತಾರೆ. ಶರಣ್ ಮನೆಯಲ್ಲಿ ತಿನ್ನುವಾಗ ಎರಡು ಕೈ ಜೋಡಿಸಿ ಪ್ರಾರ್ಥನೆ ಮಾಡಿಯೇ ತಿನ್ನುತ್ತಾನೆ. ಅಪ್ಪ ಹಾಗೂ ಅಮ್ಮನಿಗೂ ಹಾಗೆಯೇ ಪ್ರಾರ್ಥಿಸುವಂತೆ ಹೇಳುತ್ತಾನೆ. ನೀವು ಸಹ ತಿನ್ನುವಾಗ, ಮಲಗುವುದಕ್ಕಿಂತ ಮುಂಚೆ, ಆಟವಾಡುವಾಗ ಪ್ರಾರ್ಥಿಸಲು ಅಭ್ಯಾಸ ಮಾಡಿಕೊಳ್ಳಬೇಕು ಸರೀನಾ. ಈ ಶರಣ್ ಮರೆಯದೆ ಪ್ರಾರ್ಥಿಸುತ್ತಾನೆ. ಇದನ್ನೆಲ್ಲ ಗಮನಿಸಿದ ಅಪ್ಪ ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಟ್ಟರು. ಹೀಗೆ ಮನೆಯಲ್ಲೂ, ಹೊರಗು ಒಳ್ಳೆಯ ಮಗುವೆಂದು ಹೆಸರನ್ನು ಪಡೆದನು ಶರಣ್.
ಒಂದು ದಿನ ರಾಬರ್ಟ್ ಹಾಗೂ ಶರಣ್ ಆಟವಾಡುತ್ತಿದ್ದರು. ಅಮ್ಮ ರಾಬರ್ಟನ್ನು ಕೂಗಿ ಅಂಗಡಿಗೆ ಹೋಗಲು ಹೇಳಿದರು. ಅವನು ಅಂಗಡಿಗೆ ಹೋದದರಿಂದ ಶರಣ್ ಮನೆಗೆ ಹೋಗಿಬಿಟ್ಟನು. ರಾಬರ್ಟ್ ಬಂದು ನೋಡಿದಾಗ ಅವನ ಕ್ರಿಕೆಟ್ ball ಕಾಣಿಸಲಿಲ್ಲ. ನಾನು, ಶರಣ್ ಮಾತ್ರವೇ ತಾನೆ ಆಟವಾಡುತ್ತಿದ್ದೆವು. ಶರಣ್ ನೇ ನನ್ನ ballಅನ್ನು ಎತ್ತುಕೊಂಡನು ಎಂದು ಎಲ್ಲರ ಬಳಿಯೂ ಹೇಳಿದನು ರಾಬರ್ಟ್. ಇದು ಶರಣ್ ಗೆ ತುಂಬಾ ಕಷ್ಟವಾಗಿತ್ತು. ಅಂದಿನಿಂದ ರಾಬರ್ಟ್, ಶರಣ್ ನನ್ನ ballಅನ್ನು ಕಳ್ಳತನ ಮಾಡಿದ್ದರಿಂದ ಅವನೊಂದಿಗೆ ಮಾತಾಡುವುದಿಲ್ಲ ಎಂದು ಹೇಳಿದನು. Friends ಬಳಿ ಬೀದಿಯಲ್ಲಿರುವವರೆಲ್ಲರ ಬಳಿಯೂ ಸುಳ್ಳಾದ ಸುದ್ದಿಯನ್ನು ಹೇಳಿದನು ರಾಬರ್ಟ್. ಶರಣ್ ಗೆ ಕಣ್ಣಲ್ಲಿ ಕಣ್ಣೀರು ಸುರಿಯಿತು. ಮಾಡದ ತಪ್ಪನ್ನು ಊರೆಲ್ಲ ಹೇಳಿಬಿಟ್ಟನೆ! ಎಂದು ಊಟ ಕೂಡ ಮಾಡದೇ ಅಳುತ್ತಾ ಇದ್ದನು. ಅಮ್ಮ ಹೇಳಿದರು ತಾಳ್ಮೆಯಿಂದಿರು ನಿಜ ಒಂದು ದಿನ ಗೊತ್ತಾಗುತ್ತದೆ. ನಾವು ಯೇಸಪ್ಪನ ಬಳಿ ಪ್ರಾರ್ಥಿಸೋಣ ಎಂದು ಸಂತೈಸಿದರು. ಶರಣ್ ಮತ್ತು ಅವನ ತಾಯಿ ಇಬ್ಬರು ಸೇರಿ ಪ್ರಾರ್ಥಿಸಲು ಪ್ರಾರಂಭಿಸಿದರು. ಪ್ರಾರ್ಥನೆ ಮಾಡಿ ಮುಗಿಸಿದ ಕೂಡಲೇ ರಾಬರ್ಟ್ ವೇಗವಾಗಿ ಓಡಿ ಬಂದನು. ಶರಣ್ very sorry ಕಣೋ ನಿನ್ನನ್ನು ತಪ್ಪಾಗಿ ನೆನೆಸಿಬಿಟ್ಟೆ. ನಮ್ಮ ಮನೆಯ ನಾಯಿ ಮರಿ ball ನ್ನು ತೆಗೆದುಕೊಂಡು ಹೋಗಿ ತೋಟದಲ್ಲಿ ಹಾಕಿಬಿಟ್ಟಿದೆ. ಇಂದು ತೋಟಕ್ಕೆ ನೀರು ಹಾಕಲು ಹೋಗಿದ್ದೆನಾ ಆಗಲೇ ಈ ball ನ್ನು ನೋಡಿದೆ. ನನ್ನನ್ನು ಕ್ಷಮಿಸು ಎಂದು ಹೇಳಿದ ರಾಬರ್ಟ್ ನನ್ನು ನೋಡಿ ಶರಣ್ ನಗುತ್ತಾ, ದೇವರೇ ನೀನು ನನಗಾಗಿ ಕಾರ್ಯ ಮಾಡಿದ್ದಕ್ಕಾಗಿ ಸ್ತೋತ್ರ ಎಂದು ಹೇಳಿದನು. ಎಂದಿನಂತೆ ಇಬ್ಬರು ಸೇರಿ ಆಟವಾಡಲು ಪ್ರಾರಂಭಿಸಿದರು.
ಮುದ್ದು ಪುಟಾಣಿಗಳೇ! ನೀವು ಕೂಡ ಮಾಡದ ತಪ್ಪಿಗಾಗಿ ಅಳುತ್ತಾ ಇದ್ದೀರಾ? Don't worry ಯೇಸಪ್ಪ ನಿಮ್ಮ ಪಕ್ಕದಲ್ಲಿ ಸಹಾಯ ಮಾಡುತ್ತಾರೆ. ಅದನ್ನು ಬಿಟ್ಟು ಎದುರಿಸಿ ಜಗಳ ಮಾಡಿದರೆ, ಸಮಾಧಾನವೇ ಹೋಗಿಬಿಡುತ್ತದಲ್ಲವೇ? ಆದ್ದರಿಂದ ಪ್ರಾರ್ಥಿಸಿ ಸಮಾಧಾನವಾಗಿದ್ದರೆ, ಯೇಸುವೇ ನಿನಗಾಗಿ ಹೋರಾಡುತ್ತಾರೆ, ಎಲ್ಲವನ್ನು ಮಾಡಿ ಮುಗಿಸುತ್ತಾರೆ. Ok ನಾ.
- Mrs. ಜೀವಾ ವಿಜಯ್
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482