Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.12.2024 (Kids Special)
Share:

By Village Missionary Movement

Sunday, 29-Dec-2024

ಧೈನಂದಿನ ಧ್ಯಾನ(Kannada) – 29.12.2024 (Kids Special)

 

ಬಾಲಾ ಮತ್ತು ಕುದುರೆ

 

"ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು" - ಜ್ಞಾನೋಕ್ತಿ 23:18

 

ಬಾಲಾ ತನ್ನ ತಂದೆ ಮತ್ತು ತಾಯಿಯ ಏಕೈಕ ಮಗು, ತುಂಬಾ ಮುದ್ದಾಗಿ ಬೆಳೆದನು. ತಂದೆ ದೂರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ವರ್ಷಕ್ಕೊಮ್ಮೆ ಮಾತ್ರ ಮನೆಗೆ ಬರುತ್ತಿದ್ದರು. ಬಂದಾಗಲೆಲ್ಲ ಅವನಿಗೆ ಬೇಕಾದುದನ್ನೆಲ್ಲಾ ತೆಗೆದುಕೊಂಡು ಬರುತ್ತಿದ್ದರು. ಅವರು ಬಂದು ಹೋಗುವವರೆಗೂ ಅವನಿಗೆ ಒಂದೇ ಸಂಭ್ರಮವಾಗಿರುತ್ತಿತ್ತು.

 

ವರ್ಷಗಳು ಕಳೆದವು ಮತ್ತು ಬಾಲಾ ಬೆಳೆದು ಯುವಕನಾದನು. ಅವನ ವಯಸ್ಸಿನ ಎಲ್ಲಾ ಯುವಕರು ಕುದುರೆಗಳನ್ನು ಹೊಂದಿದ್ದರು. ಇದು ಅವರ ಹೆಮ್ಮೆಯಾಗಿತ್ತು. ಬಾಲಾ ಕೂಡ ಕುದುರೆಯ ಮೇಲೆ ಹೋಗಬೇಕೆಂದಿದ್ದ. ಅವನು ಅದನ್ನು ತನ್ನ ತಂದೆಗೆ ಹೇಳಿ ಕಳುಹಿಸಿದನು. ತನ್ನ ತಂದೆ ತನಗೆ ಶೀಘ್ರದಲ್ಲೇ ಕುದುರೆ ತೆಗೆದುಕೊಂಡು ಬರುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದನು. ಒಂದು ದಿನ ಅವನ ತಂದೆಯ ಆತ್ಮೀಯ ಸ್ನೇಹಿತ ಕುದುರೆಯ ಮೇಲೆ ಅವನ ಮನೆಯ ಮುಂದೆ ಬಂದು ನಿಂತರು. ತಕ್ಷಣ ಬಾಲಾ ಆಹಾ! ನನ್ನ ತಂದೆ ನನಗೆ ಕುದುರೆಯನ್ನು ಕಳುಹಿಸಿದ್ದಾರೆಂದು ಭಾವಿಸಿ ವೇಗವಾಗಿ ಓಡಿದನು. ಅವರೋ ನೀನು ಹೊರಡು ಒಂದು ತಿಂಗಳು ನೀನು ನನ್ನ ಜೊತೆಯಲ್ಲಿ ಇರಬೇಕು ಎಂದು ಹೇಳಿದರು. ಬಾಲಾ ಕೂಡ ತನಗಾಗಿ ಕುದುರೆಯನ್ನು ಕೊಳ್ಳಲು ಕರೆದುಕೊಂಡು ಹೋಗುತ್ತಿದ್ದಾರೆ ಎಂದುಕೊಂಡು ಅವರೊಂದಿಗೆ ಹೋದನು. ಅವರು ಒಂದು ದೊಡ್ಡ ಜಾಗಕ್ಕೆ ಕರೆದೊಯ್ದು ವೇಗವಾಗಿ ಓಡಲು ಹೇಳಿದರು. ನಂತರ ಅವನನ್ನು ಕುದುರೆಯೊಂದಿಗೆ ಓಡಲು ಹೇಳಿದರು. ಒಂದು ವಾರ ಹೀಗೆ ಏನೂ ಅರ್ಥವಾಗದೆ ಓಡುತ್ತಿದ್ದ. ಮೂಳೆ ಮುರಿತಕ್ಕೆ ಔಷಧ ಬೆರೆಸುವುದು, ಸ್ನಾಯು ಸೆಳೆತಕ್ಕೆ ಹೇಗೆ ಔಷಧ ಕೊಡುವುದು, ವಿಷದ ಕಡಿತಕ್ಕೆ ಏನು ಮಾಡಬೇಕು ಎಂದು ಕೆಲವು ಹಸಿರು ಎಲೆಗಳ ಗುರುತು ತೋರಿಸಿ ಅದನ್ನು ಯಾವ ಸಮಯದಲ್ಲಿ ಹೇಗೆ ಬಳಸಬೇಕು ಎಂದು ಔಷಧ ಹೇಳಿಕೊಟ್ಟರು. ಬಾಲನ ಕೋಪ ತಾರಕಕ್ಕೇರಿತು. ಆದರೆ ಅವನು ಕುದುರೆಗಾಗಿ ಎಲ್ಲವನ್ನೂ ಸಹಿಸಿಕೊಂಡನು. ಮರುದಿನ ಬೆಳಿಗ್ಗೆ, ತಮ್ಮಾ ಎಲ್ಲಾ ಮುಗಿಯಿತು ನೀನು ಮನೆಗೆ ಹೋಗಬಹುದು ಎಂದು ಅವನನ್ನು ಬರಿದಾಗಿ ಕಳುಹಿಸಿಬಿಟ್ಟರು. ಬಾಲನಿಗೆ ದುಃಖ ಗಂಟಲು ಕಟ್ಟಿತು ಮತ್ತು ಅವನು ನಿರಾಶೆಯಿಂದ ಮನೆಗೆ ಹಿಂದಿರುಗಿದನು. ಅಂದಿನಿಂದ ಅವನಿಗೆ ಸರಿಯಾಗಿ ನಿದ್ದೆ ಬಂದಿಲ್ಲ.

 

ಕೆಲವು ದಿನಗಳ ನಂತರ, ಅವನು ಕುದುರೆಯೊಂದರ ಸದ್ದು ಕೇಳಿ ಕಣ್ಣುಜ್ಜಿಕೊಂಡು ಹೊರಗೆ ಬಂದನು. ಹಾಗೆ ಬಂದವನಿಗೆ ಆಶ್ಚರ್ಯವನ್ನು ಸಹಿಸಲಾಗಲಿಲ್ಲ. ಅಲ್ಲಿ ಅವನ ತಂದೆ ಎತ್ತರದ ಬಿಳಿ ಅರೇಬಿಯನ್ ಕುದುರೆಯೊಂದಿಗೆ ನಿಂತಿದ್ದರು. ಓಡಿ ಹೋಗಿ ಅಪ್ಪನನ್ನು ತಬ್ಬಿಕೊಂಡ. ಇದನ್ನು ನನಗೇಕೆ ಬೇಗನೆ ತೆಗೆದುಕೊಡಲಿಲ್ಲ, ತಡಮಾಡಿ ನನ್ನನ್ನು ಸಂಕಟ ಪಡುವಂತೆ ಮಾಡಿದಿರಿ ಎಂದನು. ಅಪ್ಪ ತಕ್ಷಣ ನೀನು ಸಾಮಾನ್ಯ ಕುದುರೆಯನ್ನು ಕೇಳಿದೆ. ಆದರೆ ನಾನು ಉನ್ನತ ದರ್ಜೆಯ ಕುದುರೆಯನ್ನು ಖರೀದಿಸಲು ಬಯಸಿದ್ದೆ. ಹಾಗಾಗಿ ನಿನಗೆ ತರಬೇತಿ ನೀಡಲು ನನ್ನ ಸ್ನೇಹಿತನನ್ನು ಕಳುಹಿಸಿದೆ. ಈಗ ನಿನಗೆ ಕುದುರೆಯನ್ನು

ನೀಡಿದರೆ, ನೀನು ಒಂಟಿಯಾಗಿ ಅದನ್ನು ನಿಭಾಯಿಸಿಕೊಳ್ಳುತ್ತೀಯ. ನೀನು ತರಬೇತಿ ಪಡೆಯುವುದಕ್ಕಾಗಿಯೇ ಇಷ್ಟು ತಡ ಮಾಡಿದೆ ಎಂದು ಹೇಳಿದರು.       

 

ಪ್ರೀತಿಯ ತಮ್ಮ ತಂಗಿ! ಬಾಲನ ಹಾಗೆಯೇ ನಾವು ಸಹ ಕೇಳಿದ ತಕ್ಷಣವೇ ಸಿಗಬೇಕು ಅಂತ ನೆನೆಸುತ್ತೇವೆ. ಹಠ ಮಾಡುತ್ತೇವೆ. ಆದರೆ ಯಾವುದನ್ನು ಯಾವಾಗ ಕೊಡಬೇಕೆಂದು ಯೇಸಪ್ಪನಿಗೆ ತಿಳಿದಿದೆ. ಸರಿಯಾದ ಸಮಯದಲ್ಲಿ ಕೊಡುತ್ತಾರೆ. ಅಲ್ಲಿಯವರೆಗೂ ಕಾದಿರಬೇಕು O. k ನಾ. 

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş