Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.01.2025
Share:

By Village Missionary Movement

Friday, 24-Jan-2025

ಧೈನಂದಿನ ಧ್ಯಾನ(Kannada) – 24.01.2025

 

ಕಾಪಾಡುವ ದೇವರು

 

"ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮರೆಹೊಕ್ಕವರನ್ನು ಬಲ್ಲನು" - ನಹೂಮ 1:7

 

ಕರ್ತನು ಯಾವಾಗಲೂ ಒಳ್ಳೆಯವನು ಮತ್ತು ನಮಗೆ ಒಳ್ಳೆಯದನ್ನೇ ಮಾಡುವಾತನಾಗಿದ್ದಾನೆ. ಮೇಲಿನ ವಚನದ ಪ್ರಕಾರ, ಯೆಹೋವನು ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇನ್ನು ಅಷ್ಟೇ ಎಲ್ಲವೂ ಮುಗಿದುಹೋಯಿತು ಎಂದು ಚಿಂತಿತರಾಗಿ ನಿಂತಿರುವ ಸಮಯದಲ್ಲಿ ನಮ್ಮನ್ನು ಮೇಲೆತ್ತಿದರಲ್ಲವೇ? ಒಂದು ಘಟನೆಯನ್ನು ಹೇಳುತ್ತೇನೆ ಕೇಳಿರಿ.

  

ಎರಡು ದೇಶಗಳ ನಡುವಿನ ಯುದ್ಧ ಮುಗಿದ ನಂತರ, ಸೋತ ದೇಶದ ಸೈನಿಕರನ್ನು ಕೈದಿಗಳಂತೆ ಕೋಣೆಯಲ್ಲಿ ಬಂಧಿಸಲಾಯಿತು. ಕೈದಿಗಳಲ್ಲಿ ಒಬ್ಬರು ತಪ್ಪಿಸಿಕೊಂಡರು. ಸೈನಿಕರು ಅದನ್ನು ನೋಡಿ ಅವನನ್ನು ಬೆನ್ನಟ್ಟಿದರು. ಅವನು ಹೋಗಿ ಒಂದು ಶಿಥಿಲವಾದ ಮನೆಯ ಕತ್ತಲೆಯ ಕೋಣೆಯಲ್ಲಿ ಅಡಗಿಕೊಂಡರು. ಆ ಕೋಣೆಯಿಂದ ಕಣ್ಣೀರಿನೊಂದಿಗೆ ಅವರು ದೇವರನ್ನು ಪ್ರಾರ್ಥಿಸಿದರು. ನಂತರ, ಅವರು ಇದ್ದ ಕೋಣೆಯ ಬಾಗಿಲಲ್ಲಿ ಜೇಡವೊಂದು ತನ್ನ ಬಲೆ ಹೆಣೆಯುವುದನ್ನು ನೋಡಿದರು. ಆ ಬಲೆ ಬಾಗಿಲನ್ನು ಮುಚ್ಚಿತ್ತು. ಅವರನ್ನು ಬೆನ್ನಟ್ಟುತ್ತಿದ್ದ ಸೈನಿಕರು ಕೋಣೆಯ ಬಾಗಿಲಲ್ಲಿ ನಿಂತರು, ಆದರೆ ಅವರನ್ನು ಕಾಣದೆ, ಅವರು ಬಂದ ದಾರಿಯಲ್ಲೇ ಹಿಂತಿರುಗಿದರು. ಕಾರಣ ಏನು ಗೊತ್ತಾ? ಜೇಡಗಳು ಮಾನವ ಸಂಚಾರವಿಲ್ಲದ ಸ್ಥಳಗಳಲ್ಲಿ ಮಾತ್ರ ತಮ್ಮ ಗೂಡುಗಳನ್ನು ನಿರ್ಮಿಸುತ್ತವೆ. ನಮ್ಮ ದೇವರು ಅದ್ಭುತನು. ಒಂದು ಸಣ್ಣ ಜೇಡದ ಸಹಾಯದಿಂದ ಒಬ್ಬ ನಾಯಕನ ಜೀವವನ್ನು ಹೇಗೆ ಉಳಿಸಿದ್ದಾರೆ ನೋಡಿರಿ.

         

ಅದೇ ರೀತಿ, ಸತ್ಯವೇದದಲ್ಲಿ, ದೇವರ ಮನುಷ್ಯನಾದ ಮೋಶೆಯು ಇಸ್ರಾಯೇಲ್ ಜನರನ್ನು ಫರೋಹನ ಹಿಡಿತದಿಂದ ರಕ್ಷಿಸಿ ಒಟ್ಟುಗೂಡಿಸಿಕೊಂಡು ಬರುತ್ತಿದ್ದಾಗ, ಫರೋಹನ ಸೈನ್ಯವು ಇದ್ದಕ್ಕಿದ್ದಂತೆ ಅವರನ್ನು ಬೆನ್ನಟ್ಟಿ ಬಂದಿತು. ಇಸ್ರಾಯೇಲ್ ಜನರು ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ. ಮುಂದೆ ದೊಡ್ಡ ಕೆಂಪು ಸಮುದ್ರ, ಹಿಂದೆ ಫರೋಹನ ದೊಡ್ಡ ಸೈನ್ಯ. ಜನರು ಭಯಭೀತರಾಗಿ ಮೋಶೆಯ ವಿರುದ್ಧ ಗುಣುಗುಟ್ಟಿದರು. ದೇವರು ಅವರನ್ನು ಹೇಗೆ ಕಾಪಾಡಿದರು ಗೊತ್ತಾ? ಕರ್ತನು ಮೋಶೆಗೆ, “ನಿನ್ನ ಕೈಯಲ್ಲಿರುವ ಕೋಲನ್ನು ಸಮುದ್ರದ ಮೇಲೆ ಚಾಚು ಎಂದು ಹೇಳಿದರು. ಆಗ ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿದರು." (ವಿಮೋಚನಕಾಂಡ 14:21). ಕೆಂಪು ಸಮುದ್ರವು ಇಬ್ಭಾಗವಾಗುವ ಮೊದಲು ಈ ಜನರ ಮುಂದೆ ಹೋಗಿದ್ದ ದೇವದೂತನು ಹಿಂದೆ ಸರಿದು ಇಸ್ರಾಯೇಲ್ ಜನರ ಹಿಂದೆ ನಡೆದರು. ಅವರ ಮುಂದೆ ಹೋಗಿದ್ದ ಮೇಘ ಸ್ತಂಭವು ದೂರ ಸರಿದು ಅವರ ಹಿಂದೆ ನಿಂತಿತು. ಅದು ಐಗುಪ್ತದ ಸೈನ್ಯವು ಮತ್ತು ಇಸ್ರಾಯೇಲಿನ ಸೈನ್ಯವು ಸೇರದ ಹಾಗೆ ಅವುಗಳ ನಡುವೆ ನಿಂತಿತು. ಐಗುಪ್ತರಿಗೆ ಅದು ಮೇಘವೂ ಮತ್ತು ಅಂಧಕಾರವಾಗಿಯೂ ಇತ್ತು. ಆದರೆ ಇಸ್ರಾಯೇಲ್ಯರಿಗೋ ಅದು ರಾತ್ರಿಯನ್ನು ಬೆಳಗಿಸುತ್ತಿತ್ತು. ನಮ್ಮ ಕರ್ತನು ಎಷ್ಟು ಅದ್ಭುತನೆಂದು ನೋಡಿ. ಕೆಂಪು ಸಮುದ್ರವನ್ನು ಎರಡು ಭಾಗವಾಗಿ ಬೇರ್ಪಡಿಸಿ ಒಣ ನೆಲದ ಮೂಲಕ ದಾಟಿ ಹೋದರು. ಅವರು ಹಾದುಹೋದ ನಂತರ, ಐಗುಪ್ತದ ಸೈನ್ಯವು ಬಂದಾಗ, ಸಮುದ್ರವು ಮತ್ತೆ ಒಟ್ಟುಗೂಡಿ ಐಗುಪ್ತದ ಸೈನ್ಯವನ್ನು ನಾಶಮಾಡಿತು.

        

ನೀವು ಕೂಡ ನಿಮ್ಮ ವೈದ್ಯರಿಂದ ಕೈಬಿಡಲ್ಪಟ್ಟಿರಬಹುದು, ಸಾಲದಲ್ಲಿ ಮುಳುಗಿರಬಹುದು ಅಥವಾ ಮಕ್ಕಳಿಲ್ಲದಿರಬಹುದು. ನಮ್ಮ ದೇವರು ಆ ಯೋಧನನ್ನು ಒಂದು ಸಣ್ಣ ಜೇಡದಿಂದ ಕಾಪಾಡಿದಂತೆ, ನಮ್ಮ ಕರ್ತನು ನಮ್ಮ ಸಮಸ್ಯೆ ಏನೇ ಆಗಿದ್ದರೂ, ನಮ್ಮನ್ನು ಕರಹಿಡಿದು ಕಾಪಾಡುತ್ತಾರೆ. ಪ್ರಿಯರೇ, ನಮ್ಮ ಯೇಸು ನಮ್ಮನ್ನು ಕೈಬಿಡುವುದಿಲ್ಲ, ಮರೆಯುವುದಿಲ್ಲ. ಚಿಂತಿಸಬೇಡಿ.

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ:

ವೆಲ್ಲೂರಿನಲ್ಲಿ ನಡೆಯುವ ಯೌವನಸ್ಥರ ಶಿಬಿರದ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet vaycasino giriş vaycasino marsbahis giriş marsbahis holiganbet setrabet marsbahis giriş vaycasino giriş