By Village Missionary Movement
Friday, 28-May-2021ಧೈನಂದಿನ ಧ್ಯಾನ(Kannada) – 28.05.2021
ತಾಳ್ಮೆ
"ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ..." - ಮತ್ತಾಯ 11:29
ವರ್ಲ್ಡ್ ಕಪ್ ಫುಟ್ಬಾಲ್ ಆಟದ ಕೊನೆಯ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಸೋಲಿಸಿ ವರ್ಲ್ಡ್ ಕಪ್ ಅನ್ನು ಗೆದ್ದಿತು ಜರ್ಮನಿ. ಎರಡು ತಂಡದವರು ಬಹಳ ಬುದ್ಧಿವಂತಿಕೆಯಿಂದ ಆಟವಾಡಿದರು. ಆದರೆ ಹೆಚ್ಚು ಸಮಯದಲ್ಲಿ ಜರ್ಮನಿ ಆಟಗಾರನು ಇನ್ನು ಹೆಚ್ಚು ಗೋಲ್ ಗಳನ್ನು ಹಾಕಿ ತನ್ನ ದೇಶಕ್ಕೆ ಜಯವನ್ನು ತಂದುಕೊಟ್ಟನು. ಈತನು ತನ್ನ ಫೇಸ್ಬುಕ್ ನಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮೆಸೇಜ್ ಹಾಕಿದ್ದರು. ತನ್ನ ಎಲ್ಲಾ ಜಯವನ್ನು ದೇವರ ಪಾದದಲ್ಲಿ ತಾಳ್ಮೆಯಿಂದ ಸಮರ್ಪಿಸಿ ಮೌನವಾಗಿ ಭೇಟಿಕೊಡುತ್ತಿದ್ದ ಇವರು ಒಂದು ತೀವ್ರವಾದ ವಿಶ್ವಾಸಿ ಯಾಗಿದ್ದಾರೆ. ಅಧಿಕವಾಗಿ ದೇವರನ್ನು ಪ್ರೀತಿಸುತ್ತಿದ್ದ ಇವರು, ಪ್ರಪಂಚದ ಇತಿಹಾಸದಲ್ಲಿ ಇವರ ಹೆಸರು ಬರೆಯಲ್ಪಟ್ಟಾಗ, "ದೇವರೇ ನಿಮ್ಮ ಬಳಿ ನಾನು ಯಾವುದನ್ನು ಕೇಳಲಿಲ್ಲ, ಆದರೆ ನೀವು ಕೊಟ್ಟಿರುವ ಎಲ್ಲವುಗಳಿಗಾಗಿ ಕೃತಜ್ಞತೆ ಹೇಳುತ್ತೇನೆ" ಎಂದು ತಾಳ್ಮೆಯಿಂದ ಹೇಳಿರುವುದು ಆಶ್ಚರ್ಯವೇ.
ನಮ್ಮ ಕರ್ತನಾದ ಯೇಸುಕ್ರಿಸ್ತನು ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ಶಿಲುಬೆಯಲ್ಲಿ ಮರಣದವರೆಗೂ ತನ್ನನ್ನು ತಗ್ಗಿಸಿಕೊಂಡರು ಎಂದು ಸತ್ಯವೇದವು ಹೇಳುತ್ತಿದೆ. ಯೇಸುಕ್ರಿಸ್ತನು ಭೂಮಿಯಲ್ಲಿ ಜೀವಿಸುತ್ತಿದ್ದ ದಿನಗಳಲ್ಲಿ ಅವರ ಸೇವೆಯ ಹಾದಿಯಲ್ಲಿ ತನ್ನೊಂದಿಗಿದ್ದ ಶಿಷ್ಯರಿಗೆ ತಾಳ್ಮೆಯನ್ನು ಕಲಿಸಿಕೊಟ್ಟರು. ಶಿಷ್ಯರ ಕಾಲುಗಳನ್ನು ತೊಳೆದು ತಾಳ್ಮೆಯನ್ನು ಬಹಿರಂಗಪಡಿಸಿ, ಜೀವಿಸಿ ತೋರಿಸಿದರು. ಹೀಗೆ ನಮಗೆಲ್ಲಾ ಒಂದು ಮೂಲಮಾದರಿಯನ್ನು ತೋರಿಸಿಕೊಟ್ಟು ಹೋಗಿದ್ದಾರೆ.
ಪ್ರಿಯರೇ! ಅಭಿವೃದ್ಧಿ ಗೆ ಮೊದಲು ತಾಳ್ಮೆ. ನಮಗೆ ತಗ್ಗಿಸಿಕೊಳ್ಳಲು ತಿಳಿದಿದ್ದರೆ ದೇವರು ಬದುಕಿರಲು ದಾರಿ ತೋರಿಸುತ್ತಾರೆ. ಯಾರು ಬೇಕಾದರೂ ಪ್ರಯತ್ನಿಸಿದರೆ ಜ್ಞಾನವನ್ನು ಹೊಂದಿಕೊಳ್ಳಬಹುದು; ಆದರೆ ತಾಳ್ಮೆಯುಳ್ಳವರು ಮಾತ್ರವೇ ಕೃಪೆಯನ್ನು ಹೊಂದಿಕೊಳ್ಳಲು ಸಾಧ್ಯ. ನಾವೇ ನಮ್ಮನ್ನು ತಗ್ಗಿಸಿಕೊಂಡು ಬಿಟ್ಟರೆ ಮತ್ತೊಬ್ಬರು ತಗ್ಗಿಸಲು ಸಾಧ್ಯವಿಲ್ಲ. ಒಂದು ದೇವಮನುಷ್ಯರು ಹೇಳಿದರು, ಮಂಚದ ಮೇಲೆ ಮಲಗಿದರೇನೆ ಕೆಳಗೆ ಬೀಳಬೇಕಾಗುತ್ತದೆ, ಚಾಪೆಯಲ್ಲಿ ಮಲಗಿದರೆ ಬೀಳಬೇಕಾದ ಅವಶ್ಯವಿಲ್ಲ ಎಂದು. ಹೌದು, ಎಲ್ಲಾ ಕಡೆ, ಎಂದಿಗೂ, ಎಲ್ಲಾದರಲ್ಲಿಯೂ ತಾಳ್ಮೆಯಿಂದ ಇರೋಣ. ನಮ್ಮ ಜೀವನದಲ್ಲಿ, ಕ್ರಿಯೆಗಳಲ್ಲಿ, ಚಿಂತೆಯಲ್ಲಿ ಯೇಸುಕ್ರಿಸ್ತನ ಹಾಗೆ ತಾಳ್ಮೆಯನ್ನು ಧರಿಸಿಕೊಳ್ಳೋಣ. ತಾಳ್ಮೆಯಿಂದ ಇರುವವರು ಹೆಚ್ಚಿಸಲ್ಪಡುವುದು ಖಂಡಿತ. ಆದ್ದರಿಂದ ತಾಳ್ಮೆಯಿಂದಿದ್ದು ಕೃಪೆಯನ್ನು, ದೇವರಿಂದ ಬರುವ ಘನತೆಯನ್ನು ಪಡೆದು ಈ ಲೋಕದಲ್ಲಿ ಆಶೀರ್ವಾದ ಕರವಾಗಿ ಜೀವಿಸೋಣ.
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:-
ನಮ್ಮ ಮಿಷಿನರಿ ಯೌವನಸ್ಥ ಮಕ್ಕಳಿಗೆ ದೇವರು ಒಳ್ಳೆಯ ಜೀವನ ಸಂಗಾತಿಯನ್ನು ದಯಪಾಲಿಸುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482