Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.05.2021 (Kids Special)
Share:

By Village Missionary Movement

Sunday, 30-May-2021

ಧೈನಂದಿನ ಧ್ಯಾನ(Kannada) – 30.05.2021 (Kids Special)

 

ಬಹುದೊಡ್ಡ ಆಯುಧ

 

"ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು; ನಿನ್ನ ಪ್ರಾಣವನ್ನು ಕಾಯುವನು" - ಕೀರ್ತನೆಗಳು 121:7

 

ಜೋಸೆಫ್ ಅಣ್ಣ Theology ಓದುವುದಕ್ಕಾಗಿ ತನ್ನ ಸ್ವಂತ ದೇಶವನ್ನು ಬಿಟ್ಟು, ಬೇರೆ ದೇಶಕ್ಕೆ ಓದಲು ಹೋದರು. ವಿದ್ಯಾಭ್ಯಾಸ ಮುಗಿದು ಐದು ವರ್ಷಗಳ ನಂತರ ಸ್ವಂತ ದೇಶಕ್ಕೆ ಹಿಂದಿರುಗಳು ಸಿದ್ಧರಾದರು. ಹಡಗು ಪ್ರಯಾಣ ಆಲಸ್ಯವಾಯಿತು. ಹೆಚ್ಚಾಗಿ ಇಬ್ಬನಿ ಇದ್ದದರಿಂದ ಹಡಗು ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಎಲ್ಲರಿಗೂ ತುಂಬಾ ಭಯ. ಆದರೆ ಜೋಸೆಫ್ ಅಣ್ಣ ಸ್ವಲ್ಪ ಕೂಡ ಭಯಪಡದೆ ಇದ್ದರು. ಏನೇ ನಡೆದರೂ ಯೇಸಪ್ಪ ನಿನ್ನೊಂದಿಗೆ ಇದ್ದಾರೆ ಎಂದು ಹೇಳುತ್ತಿದ್ದರು. ಇಬ್ಬನಿ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ ಧಿಡೀರ್ ಎಂದು ಹಡಗು ಬಂಡೆಗೆ ತಗುಲಿ ಒಡೆದುಹೋಯಿತು. ಈಜಲು ತಿಳಿದವರು ಈಜುತ್ತಾ ಹೋಗಿ ದಡಕ್ಕೆ ಸೇರಿದರು. ಜೋಸೆಫ್ ಅಣ್ಣನಿಗೂ ಈಜಲು ಗೊತ್ತಿಲ್ಲ ಕೀರ್ತನೆಗಳು 121ನೇ ಅಧ್ಯಾಯವನ್ನು ಹೇಳಿಕೊಳ್ಳುತ್ತಲೇ ಇದ್ದರು.

 

ಮರುದಿನ ಬಿಸಿಯಾದ ಮರಳಿನಲ್ಲಿ ಮಲಗಿರುವುದನ್ನು ಗ್ರಹಿಸಿದರು. ಕಣ್ಣು ತೆರೆದು ನೋಡಿದಾಗ, ತನ್ನ ಸುತ್ತಲೂ ಅರಣ್ಯವಾಸಿಗಳು ಸಂಗೀತ ವಾದ್ಯಗಳೊಂದಿಗೆ, ಹಾಡಿ ಕುಣಿಯುತ್ತಿದ್ದರು. ಅವರ ಭಾಷೆಯೇ ಅರ್ಥವಾಗಲಿಲ್ಲ. ಮತ್ತೆ 121ನೇ ಕೀರ್ತನೆಯನ್ನು ಹೇಳಿದರು, ನೀವು ಕೂಡ ಈ ಅಧ್ಯಾಯವನ್ನು ಬಾಯಿಪಾಠ ಮಾಡಿಕೊಳ್ಳಬಹುದು. Ok ಅಪಾಯದ ದಿನಗಳಲ್ಲಿ ವಾಕ್ಯವು ನಿನ್ನನ್ನು ಕಾಪಾಡುತ್ತದೆ. ನಂತರ ಜೋಸೆಫ್ ಅಣ್ಣನನ್ನು ಏನು ಮಾಡಿದರು ಗೊತ್ತಾ? ಮರಕ್ಕೆ ಕಟ್ಟಿ ಹಾಕಿದರು. ಒಳ್ಳೆಯ ಔತಣ ಸಿಕ್ಕಿತೆಂದು ನೆನೆಸಿದರು. ಆಗ ಆ ಮರದ ಮೇಲೆ ಎರಡು ಪಕ್ಷಿಗಳು ಜೋರಾಗಿ ಶಬ್ದ ಮಾಡುತ್ತಾ ವ್ರತ್ತಾಕಾರವಾಗಿ ಹಾರಾಡುತ್ತಿದ್ದವು. ನಂತರ ಆ ಮರದಲ್ಲಿ ಬಂದು ಕುಳಿತವು. ಇದೆಲ್ಲವನ್ನು ಗಮನಿಸಿದ ಅರಣ್ಯವಾಸಿಗಳ ನಾಯಕ, ಇವನ ಬಳಿ ಏನೋ ಒಂದು ಶಕ್ತಿ ಇದೆ ಎಂದು ನೆನೆಸಿ ಮೊಣಕಾಲೂರಿ ನಮಸ್ಕರಿಸಲು ಪ್ರಾರಂಭಿಸಿದನು. ಜೋಸೆಫ್ ಅಣ್ಣನಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಬಿಟ್ಟನು.

 

ಭಾಷೆ ತಿಳಿಯದೆ ಹೋದದ್ದರಿಂದ ಯೇಸುಕ್ರಿಸ್ತನ ಶಿಲುಬೆಯ ದರ್ಶನವನ್ನು ಚಿತ್ರವಾಗಿ ಬರೆದು ಕೈ ಸನ್ನೆಯ ಮೂಲಕ ಅವರಿಗೆ ಸುವಾರ್ತೆಯನ್ನು ಹೇಳಿದರು. ಅರಣ್ಯವಾಸಿಗಳಿಗೆ ಒಳ್ಳೆಯ ಅಭ್ಯಾಸಗಳನ್ನು ಹೇಳಿಕೊಟ್ಟರು. ಮಣ್ಣು ತೋಡಿ ಪೈರು ಹಾಕಲು, ಕೆಲಸ ಮಾಡಲು ಕಲಿಸಿಕೊಟ್ಟರು. ಇವರ ಪ್ರೀತಿಯ ನಡತೆಯ ಮೂಲಕ ಆ ಗ್ರಾಮವನ್ನೇ ಯೇಸುವಿಗೆ ಸ್ವಂತ ಮಾಡಿಬಿಟ್ಟರು. ಇದಕ್ಕೆಲ್ಲಾ ಕಾರಣ ದೇವರವಾಕ್ಯ ಅವರ ಹೃದಯದಲ್ಲಿ ಬಹುದೊಡ್ಡ ಆಯುಧವಾಗಿದ್ದದ್ದೇ. ಆ ವಾಕ್ಯವೆಂಬ ಆಯುಧವೇ ಜೋಸೆಫ್ ಅಣ್ಣನನ್ನು ಕಾಪಾಡಿತು, ಸಾಕ್ಷಿಯಾಗಿ ನಿಲ್ಲಿಸಿತು. ಭಯ ಉಂಟಾಗುವಾಗ, ಹೃದಯದಲ್ಲಿ ವಾಕ್ಯವಿದ್ದರೇನೆ ಹೇಳಲು ಸಾಧ್ಯ. ಆದ್ದರಿಂದ ನೀವು daily ವಾಕ್ಯವನ್ನು ಬಾಯಿಪಾಠ ಮಾಡಬೇಕು. Online class, exam ಏನೂ ಇಲ್ಲ. Leave ತಾನೇ. ವಾಕ್ಯವನ್ನು ಚೆನ್ನಾಗಿ ಬಾಯಿಪಾಠ ಮಾಡಿಕೊಳ್ಳಿರಿ.

 

ಏನು ಪುಟಾಣಿಗಳೇ! ಜೋಸೆಫ್ ಅಣ್ಣ 121ನೇ ಕೀರ್ತನೆಯನ್ನು ಹೇಳುತ್ತಲೇ ಜಯಕರವಾಗಿ ಜೀವಿಸಿದರು ನೋಡಿದಿರಾ? ನೀನು ಕೂಡ ಸತ್ಯವೇದವನ್ನು ಓದಿ, ಬಾಯಿಪಾಠ ಮಾಡಿ ಅದರಂತೆ ನಡೆದು, ಯೇಸುವಿಗೆ ಇಷ್ಟವಾಗಿ ಜೀವಿಸಬೇಕು. Okನಾ.

- Mrs. ಲೀಬನೋನ್ ರಾಜ್ ಕುಮಾರ್

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet