Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.09.2025
Share:

By Village Missionary Movement

Wednesday, 17-Sep-2025

ಧೈನಂದಿನ ಧ್ಯಾನ(Kannada) – 17.09.2025

 

ಹಂತಹಂತವಾದ ಅಳಿವು

 

"ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು" - ಜ್ಞಾನೋಕ್ತಿ 28:13

 

ಲೂಕ 15 ರಲ್ಲಿ, ಕಿರಿಯ ಮಗನ ಅಳಿವಿನ ಬಗ್ಗೆ ನಾವು ಓದುತ್ತೇವೆ. ಅವನ ಅಳಿವು ಕ್ರಮೇಣವಾಗಿತ್ತು, ಇದು ಸ್ವಾರ್ಥ, ವಿಭಜನೆ, ನಾಶ, ಅವಮಾನ ಮತ್ತು ಹಸಿವಿಗೆ ಕಾರಣವಾಯಿತು. ಹವ್ವಳ ಸ್ಥಿತಿಯೂ ಇದೇ ರೀತಿಯಾಗಿತ್ತು. ಹವ್ವಳು ಸರ್ಪದ ಧ್ವನಿಯನ್ನು ಆಲಿಸಿದಳು. ಅವಳು ಹಣ್ಣನ್ನು ಇಚ್ಚೆಯಿಂದ ನೋಡಿದಳು, ಅದನ್ನು ತೆಗೆದುಕೊಂಡು ತಿಂದಳು; ತನ್ನ ಗಂಡನಿಗೂ ಕೊಟ್ಟಳು. ಅವಳು ದೇವರ ಆಜ್ಞೆಗೆ ಅವಿಧೇಯಳಾದಳೆಂದು ನೋಡುತ್ತೇವೆ. (ಆದಿ. 3:1-6)

 

ಲೋಟನ ಜೀವನವನ್ನು ನಾವು ನೋಡುವಾಗ, ಅವನ ಕಣ್ಣುಗಳು ಸೊದೋಮಿನ ಕಡೆಗೇ ಇತ್ತು. ನಂತರ ಅವನು ಅದನ್ನೇ ಆರಿಸಿಕೊಂಡನು. ಅಲ್ಲಿಗೆ ಪ್ರಯಾಣ ಬೆಳೆಸಿದನು. ನಂತರ ಅವನು ಒಂದು ಮನೆಯನ್ನು ನಿರ್ಮಿಸಿ ಅಲ್ಲಿ ಶಾಶ್ವತವಾಗಿ ವಾಸಿಸುತ್ತಿದ್ದನು. ಕಿರಿಯ ಮಗ, ಹವ್ವ ಮತ್ತು ಲೋಟನ ಜೀವನದಲ್ಲಿ ಅಳಿವು ತಕ್ಷಣವೇ ಅಲ್ಲ, ಕ್ರಮೇಣವಾಗಿತ್ತು.

 

ಮೊದಲನೇ ಕೀರ್ತನೆಯ ಮೊದಲ ವಚನವು ನಾವು ಹೇಗೆ ನಡೆಯಬಾರದು, ಯಾರೊಂದಿಗೆ ನಿಲ್ಲಬಾರದು ಮತ್ತು ಎಲ್ಲಿ ಕುಳಿತುಕೊಳ್ಳಬಾರದು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಪಾಪವು ನಮ್ಮನ್ನು ಕ್ರಮೇಣ ಕೆಳಕ್ಕೆ ಇಳಿಸಿ ಅದರಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತದೆ. ನಾವು ನಮ್ಮ ಕಣ್ಣುಗಳಿಂದ ನೋಡುವ ದೃಶ್ಯವು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಅದರ ಬಗ್ಗೆ ಯೋಚಿಸುತ್ತಲೇ ಇದ್ದಾಗ, ನಾವು ಅದನ್ನು ಮಾಡುವವರಾಗಿ, ಅದನ್ನು ನೆರವೇರಿಸುವವರಾಗಿ ಬದಲಾಗುತ್ತೇವೆ. ಆದ್ದರಿಂದ, ನಾವು ನಮ್ಮ ಮೊದಲ ಹೆಜ್ಜೆಯನ್ನು ಸರಿಯಾಗಿ ಇಡಬೇಕು. ನಾವು ಪಾಪದ ಬಗ್ಗೆ ಎಚ್ಚರದಿಂದಿರಬೇಕು. ನಮ್ಮ ಎಲ್ಲಾ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಕಾರ್ಯಗಳು ದೇವರ ನಿಯಂತ್ರಣದಲ್ಲಿರಬೇಕು.

 

ಪ್ರಿಯರೇ, ಸೈತಾನನು ನಮ್ಮನ್ನು ಕ್ರಮೇಣ ಪಾಪಕ್ಕೆ ಬೀಳುವಂತೆ ಮಾಡಲು ಒಂದು ಚತುರ ತಂತ್ರವನ್ನು ಆಡುತ್ತಾನೆ. ಒಬ್ಬ ಕ್ರೈಸ್ತನಿಗೆ, ಒಂದೇ ದಿನದಲ್ಲಿ ಅಳಿವು ಬರುವುದಿಲ್ಲ. ಸ್ವಲ್ಪ ಸ್ವಲ್ಪವಾಗಿ ಆ ಕಾರ್ಯವು ತನ್ನನ್ನು ಕಳೆದುಕೊಳ್ಳಲು ಒಪ್ಪಿಸಿಕೊಡುವಾಗ, ಒಂದು ದಿನ ಅದು ನಮ್ಮನ್ನು ನೇರವಾಗಿ ದೊಡ್ಡ ಅಳಿವಿಗೆ ಕರೆದೊಯ್ಯುತ್ತದೆ. ಆದ್ದರಿಂದ, ಅದು ದೇವರಿಗೆ ಇಷ್ಟವಾಗದ ವಿಷಯ ಎಂದು ತಿಳಿದೂ, ಅರಿವಿಲ್ಲದೆ ಅದೇ ಸ್ಥಿತಿಯಲ್ಲಿ ಬದುಕುವುದನ್ನು ಮುಂದುವರಿಸಿದರೆ, ನಮ್ಮ ಪರಿಸ್ಥಿತಿ ಶೋಚನೀಯವಾಗುತ್ತದೆ. ಇಂದೇ ಬಿಡಲಾಗದ ಪಾಪದ ಕಾರ್ಯಗಳನ್ನು ದೇವರ ಬಳಿ ಅರಿಕೆ ಮಾಡಿ ಅವುಗಳನ್ನು ಬಿಡಲು ನಿರ್ಧರಿಸಿ, ದೇವರ ಬಳಿ ಬೇಡಿಕೊಳ್ಳೋಣ. ದೇವರಿಂದ ಕರುಣೆಯನ್ನು ಪಡೆಯೋಣ. ಆಮೆನ್.

- Mrs. ಜೆಬಕನಿ ಶೇಖರ್

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿ ಸೇವೆ ಮಾಡುತ್ತಿರುವ ನಮ್ಮ ಸೇವಕರುಗಳ ಸೌಖ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet