By Village Missionary Movement
Saturday, 20-Sep-2025ಧೈನಂದಿನ ಧ್ಯಾನ(Kannada) – 20.09.2025
ಉಜ್ಜೀವನದ ನಾಯಕ ಯಾರು?
"ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿವಿುತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ." - ಫಿಲಿಪ್ಪಿ 3:8
ಭಾರತ ದೇಶದ ಉಜ್ಜೀವನಕ್ಕಾಗಿ ದೇವರು ಯಾವ ರೀತಿಯ ಜನರನ್ನು ಹುಡುಕುತ್ತಿದ್ದಾರೆಂದು ನೋಡೋಣವಾ?
ಪ್ರಾರ್ಥನೆಯೇ ಅವರ ಮುಖ್ಯ ವ್ಯವಹಾರವಾಗಿರಬೇಕು.
ಆತ್ಮಗಳ ಕೊಯ್ಲು ಅವರ ಗುರಿಯಾಗಿರಬೇಕು.
ದೇವರ ಸಾನಿಧ್ಯವು ಅವರ ಆನಂದವಾಗಿರಬೇಕು.
ದೇವರ ಸೇವೆ ಅವರ ಹೊರೆಯಾಗಿರಬೇಕು.
ಕಠಿಣ ಪರಿಶ್ರಮ ಅವರ ಆನಂದವಾಗಿರಬೇಕು.
ಕರ್ತನಿಗಾಗಿ ಪಡುವ ಪಾಡುಗಳು ಅವರಿಗೆ ಸಂತೋಷವಾಗಿರಬೇಕು.
ಲೋಕ ಅವರಿಗೆ ಅರಣ್ಯವಾಗಿರಬೇಕು.
ಸುಖ ಭೋಗಗಳು ಅವರಿಗೆ ಕಸವಾಗಿರಬೇಕು.
ಪ್ರಾಮಾಣಿಕತೆ ಅವರೊಂದಿಗೆ ಹುಟ್ಟಿದಂತಿರಬೇಕು.
ಬೂಟಾಟಿಕೆ ಅವರಿಗೆ ಅಸಹ್ಯಕರವಾಗಿರಬೇಕು.
ಪಾಪವು ಅವರಿಗೆ ಕಹಿಯಾಗಿರಬೇಕು.
ಕ್ಷಮಿಸುವ ಸ್ವಭಾವವು ಅವರ ಸ್ನೇಹಿತನಾಗಿರಬೇಕು.
ದೇವರ ವಾಕ್ಯವು ಅವರ ಆಹಾರವಾಗಿರಬೇಕು.
ಹಣದ ಮೇಲಿನ ಪ್ರೀತಿ ಅವರ ಶತ್ರುವಾಗಿರಬೇಕು.
ಜಾತಿವಾದವು ಅವರಿಗೆ ವಾಂತಿಯಾಗಿರಬೇಕು.
ಪ್ರೀತಿ ಅವರ ಜೀವನದಲ್ಲಿ ಜೀವನದ ಮೂಲವಾಗಿರಬೇಕು.
ಆತ್ಮದ ಅಭಿಷೇಕವು ಅವರ ಬಯಕೆಯಾಗಿರಬೇಕು.
ಉಪದೇಶದಲ್ಲಿ ಅವರು ಕಪಟತನವಿಲ್ಲದೆ ಪೌಲನಂತಿರಬೇಕು.
ಉಪವಾಸವು ಅವರ ಪ್ರಾಣ ಸ್ನೇಹಿತರಾಗಿರಬೇಕು.
ದೇವರ ಚಿತ್ತವನ್ನು ಮಾಡುವುದು ಅವರ ಹಬ್ಬವಾಗಿರಬೇಕು.
ಪವಿತ್ರತೆಯು ಅವರ ಅಲಂಕಾರವಾಗಿರಬೇಕು.
ಪರಲೋಕವು ಅವರ ಸ್ವಾಸ್ಥ್ಯವಾಗಿರಬೇಕು.
ಅಂತಿಮವಾಗಿ, ನರಕವನ್ನು ನಡುಗಿಸಿ, ಪಾತಾಳವನ್ನು ಭಯಪಡಿಸಿ, ಪರಲೋಕವನ್ನು ಸಂತೋಷಪಡಿಸಿ, ಪರಮ ತಂದೆಯನ್ನು ಹೊಗಳಿಸಿ, ದೇಶವನ್ನೇ ದೇವರ ಕಡೆಗೆ ತಿರುಗಿಸುವವನೇ ಉಜ್ಜೀವನದ ನಾಯಕ! ಉಜ್ಜೀವನದ ನಾಯಕನ ಬಳಿ ಮಾತಿಗಿಂತ ಪ್ರಾರ್ಥನೆಯೇ ಹೆಚ್ಚಾಗಿರುತ್ತದೆ. ವಾದಗಳಿಗಿಂತ ಪರಿಣಾಮವು ದೊಡ್ಡದಾಗಿರುತ್ತದೆ. ಯೋಜನೆಗಳಿಗಿಂತ ಕ್ರಿಯೆಯು ದೊಡ್ಡದಾಗಿರುತ್ತದೆ. ಉಜ್ಜೀವನದ ನಾಯಕನು ಬೆಂಕಿಕಡ್ಡಿಯೇ . . . ಆದರೆ ಅವನು ಉರಿಸುವುದು ಒಲೆಯನ್ನಲ್ಲ . . . ಬಾಂಬ್ ಅನ್ನು!
- ಆರಿಸಲ್ಪಟ್ಟದ್ದು
ಪ್ರಾರ್ಥನಾ ಅಂಶ:
ನಮ್ಮ ಪತ್ರಿಕಾ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482