Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.11.2021
Share:

By Village Missionary Movement

Thursday, 11-Nov-2021

ಧೈನಂದಿನ ಧ್ಯಾನ(Kannada) – 11.11.2021

 

ಸಹಾಯ ಹಸ್ತಗಳು

 

 “ಇಲ್ಲಿ ಒಬ್ಬ ಹುಡುಗನಿ ದ್ದಾನೆ;...” - ಯೋಹಾನ 6:9

 

ಪುದುಕೋಟೈ ಜಿಲ್ಲೆ ಆದನ್ ಕೋಟೈ ಎಂಬ ಒಂದು ಚಿಕ್ಕ ಹಳ್ಳಿಗೆ ಸೇರಿದ ಜಯಲಕ್ಷ್ಮಿ (ವಯಸ್ಸು 17) ಬಹಳ ಬಡ ಕುಟುಂಬ. ಮುರಿದ ಮನೆ, ಸರಿಯಾದ ಆದಾಯವಿಲ್ಲ, ಅಮ್ಮನೂ ಸ್ವಲ್ಪ ಮಾನಸಿಕ ಅಸ್ವಸ್ಥೆ. ಜಯಲಕ್ಷ್ಮಿ ಅವರು ಉತ್ತಮ ಶಿಕ್ಷಣ ಪಡೆದು ಖಾಸಗಿ ಕಂಪನಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾದ ನಾಸಾಗೆ ಹೋಗಲು ಆಯ್ಕೆಯಾದರು. ಹೋಗಲು ಹಣವಿಲ್ಲದ್ದರಿಂದ ಚಾರಿಟಿ ಗಳು ಸಹಾಯ ಮಾಡಿದವು. ಆದರೆ ಈ ಪುಟ್ಟ ಬಾಲಕಿ ತನಗೆ ಸಿಕ್ಕಿದ ಸಹಾಯದಿಂದ, ತನ್ನ ಗ್ರಾಮದಲ್ಲಿ ಒಂದು ಮನೆಯಲ್ಲಿಯೂ ಕೂಡ ಶೌಚಾಲಯವಿಲ್ಲ ಎಂದು ಚಾರಿಟಿಯೊಂದಿಗೆ ಮಾತನಾಡಿದಳು. ಇದನ್ನು ತಿಳಿದ ದತ್ತಿ ಸಂಸ್ಥೆ ಹಲವರ ಸಹಕಾರದಿಂದ 126 ಶೌಚಾಲಯಗಳನ್ನು ಕಟ್ಟಿಕೊಟ್ಟರು. ಆ ಹಳ್ಳಿಯ ಒಳಿತಿಗಾಗಿ ನಿಂತಿದ್ದಾಳೆ. ಈ ಸುದ್ದಿ ದೂರದರ್ಶನದಲ್ಲಿ ಪ್ರಸಾರವಾಗಿ ಹಲವರಿಗೆ ಹೊಸ ಹುರುಪು ನೀಡಿತು.

 

ಒಮ್ಮೆ ಯೇಸು ಪರ್ವತದ ಮೇಲೆ ತನ್ನ ಉಪದೇಶವನ್ನು ಮುಗಿಸಿದ ನಂತರ, ನೆರೆದಿದ್ದ ಜನರಿಗೆ ಆಹಾರವನ್ನು ನೀಡುವಂತೆ ತನ್ನ ಶಿಷ್ಯರಿಗೆ ಹೇಳಿದರು. ಆಗ ಶಿಷ್ಯರಲ್ಲಿ ಒಬ್ಬರು, “ಇಲ್ಲಿ ಒಬ್ಬ ಹುಡುಗನಿ ದ್ದಾನೆ; ಅವನಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಸಣ್ಣ ವಿಾನುಗಳೂ ಅವೆ ಎಂದು ಹೇಳಿದರು. ಹೆಸರು ತಿಳಿಸಲ್ಪಡದ ಆ ಹುಡುಗ ತನಗಾಗಿ ಅದನ್ನು ತಿನ್ನಲು ಇಟ್ಟುಕೊಂಡಿದ್ದನು. ಆಗ ಅಲ್ಲಿ ನಡೆಯುವ ಕಾರ್ಯವನ್ನು ನೋಡುತ್ತಾನೆ. ಅವನೋ ಅದನ್ನು ಮುಚ್ಚಿಡಬಹುದಿತ್ತು. ಆದರೆ ಅವನು ಅದನ್ನು ಕೊಡಲು ಸಿದ್ಧನಾಗಿದ್ದನು! ಅಲ್ಲಿ ಅನೇಕ ಜನಸಮೂಹದ ಮಧ್ಯದಲ್ಲಿ ಯೇಸು ಅವನ ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಆಶೀರ್ವದಿಸಿ, ಹೆಚ್ಚು ಕಡಿಮೆ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಹಂಚಿ ಕೊಟ್ಟರು.ಮಿಕ್ಕಿದ ತುಂಡುಗಳನ್ನು ಕೂಡಿಸಿ ಹನ್ನೆರಡು ಪುಟ್ಟಿಗಳಲ್ಲಿ ತುಂಬಿದರು ಎಂದು ಓದುತ್ತೇವೆ. ಆ ಸ್ಥಳದಲ್ಲಿ ಆ ಜನರ ಪರವಾಗಿ ನಿಂತನು ಆ ಚಿಕ್ಕ ಹುಡುಗ. ಅವನ ಹೆಸರು ತಿಳಿಸಲ್ಪಡದಿದ್ದರೂ ಆ ಹುಡುಗ , ಇಂದು ಜೀವಿಸುತ್ತಿರುವ ನಮ್ಮೆಲ್ಲರಿಗೂ ಒಂದು ಉತ್ತಮ ಮಾದರಿ!

 

ಸ್ನೇಹಿತರೇ! ಇಂದು ನಾವು ಇಂತಹ ಒಂದು ಸಾಕ್ಷಿಯನ್ನು ಪಡೆಯಲು ಸಾಧ್ಯವೇ? "ಇಲ್ಲಿ ಒಬ್ಬ ಹುಡುಗ ಇದ್ದಾನೆ" ಎಂದು ನಮ್ಮ ಬಗ್ಗೆ ಹೇಳಲು ಸಾಧ್ಯವೇ? ಈ ಘೋರ ವ್ಯಾಧಿಯ ಅವಧಿಯಲ್ಲಿ ನಾವು ಮತ್ತೊಬ್ಬರಿಗಾಗಿ ನಮ್ಮ ಪ್ರತಿಭೆ, ಮೆದುಳು, ಅವಕಾಶ, ವಿದ್ಯೆ, ಹಣ, ದೈಹಿಕ ಶ್ರಮ ಮುಂತಾದವುಗಳನ್ನು ಇತರರಿಗಾಗಿ ನೀಡಬೇಕಾಗಿದೆ. ನಮ್ಮ ಊರಿನ ಜನರು, ಸಭೆ ಜನರು, ಸ್ನೇಹಿತರು ಎಲ್ಲರೂ ಕೂಡ ಇಲ್ಲೊಬ್ಬ ಇದ್ದಾನೆ ಎಂದು ಹೇಳಬೇಕು. ವಿಶೇಷವಾಗಿ ಯೌವನಸ್ಥರು ಮೇಲಿನ ಎರಡು ಉದಾಹರಣೆಗಳನ್ನು ಗಮನಿಸಬೇಕು! ಇಂತಹ ಒಂದು ಜೀವನ ಜೀವಿಸಲು ನಿಮ್ಮನ್ನು ಸಮರ್ಪಿಸಿಕೊಳ್ಳಿರಿ.

- T. ಶಂಕರರಾಜ್

 

ಪ್ರಾರ್ಥನಾ ಅಂಶ:

ಸೇವಕರಿಗಾಗಿ ಹೊರಬಿಡುತ್ತಿರುವ "ಕತ್ತೆಗಳ ಮಾರ್ಗದರ್ಶಿ" ಎಂಬ ಪತ್ರಿಕೆಯ ಮೂಲಕ ಸೇವಕರು ಹೊಸ ಅಭಿಷೇಕವನ್ನು ಹೊಂದಿ ವೈರಾಗ್ಯವಾಗಿ ಕಾರ್ಯ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino