By Village Missionary Movement
Tuesday, 16-Aug-2022ಧೈನಂದಿನ ಧ್ಯಾನ(Kannada) – 17.08.2022
ಅನಾಥ ಮಕ್ಕಳು
"ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ" - ಯಾಕೋಬ 1:27
ಟರ್ಕಿ ದೇಶದ ಸ್ವಯಂಸೇವಕರೊಬ್ಬರು ಪೋಸ್ಟ್ ಮಾಡಿದ ಫೋಟೋ ಒಂದು ಅನೇಕರ ಕಣ್ಣುಗಳಲ್ಲಿ ನೀರು ತರಿಸಿತು. ಹಸಿವು, ಕ್ಷಾಮ, ಬರಗಾಲದ ಪ್ರತೀಕವಾಗಿ ಕಾಣುವ ಸೋಮಾಲಿಯಾದಲ್ಲಿ ಈ ವರ್ಷವೂ ಒಂದೇ ಒಂದು ಹೊತ್ತಿನ ಊಟಕ್ಕೂ ಜನ ಅಲ್ಲಿ ಇಲ್ಲಿ ಅಲೆದಾಡುತ್ತಿರುವುದನ್ನು ನೋವಿನಿಂದ ನೋಡಬಹುದು. ಸರ್ಕಾರ ಸ್ಥಾಪಿಸಿದ ಶಿಬಿರಗಳಲ್ಲಿ ಪಡಿತರ ವ್ಯವಸ್ಥೆಯಲ್ಲಿ ಆಹಾರ ನೀಡಲಾಗುತ್ತಿದೆ. ಇದಲ್ಲದೇ ಹಲವು ವಿದೇಶಿ ಸ್ವಯಂಸೇವಾ ಸಂಸ್ಥೆಗಳೂ ಸೊಮಾಲಿಯಾದಲ್ಲಿ ಸಹಾಯ ಮಾಡುತ್ತಿವೆ. ಊಟದ ಪೊಟ್ಟಣ ತಂದ ವ್ಯಕ್ತಿಯನ್ನು ನೋಡಿ ಎರಡು ವರ್ಷದ ಬಾಲಕಿ ಬಹಳ ಹೊತ್ತು ಅಳುತ್ತಾ ಆತನ ಬಳಿ ಕುಳಿತಿದ್ದಳು. ಅದಾಗಲೇ ಹಸಿವಿನ ಸಂಕಟದಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದ ಮಗು ಬದುಕುವ ಆಶಾಕಿರಣ ಸಿಕ್ಕಿತೆಂದು ಭಾವಿಸಿ ಅಳುತ್ತಿತ್ತು. ಇಂತಹ ಲಕ್ಷಾಂತರ ಅನಾಥ ಮಕ್ಕಳು ಸೊಮಾಲಿಯಾದಲ್ಲಿ ಈಗಲೂ ಇದ್ದಾರೆ.
"ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ" ಎಂದು ಕರ್ತನಾದ ಯೇಸುಕ್ರಿಸ್ತನು ಸುವಾರ್ತೆಯಲ್ಲಿ ಹೇಳಿದ್ದನ್ನು ಓದುತ್ತೇವೆ. ಮೇಲೆ ಓದಿದ ಘಟನೆಯಲ್ಲಿ, ಅನೇಕ ಸ್ವಯಂಸೇವಾ ಸಂಸ್ಥೆಗಳು ಅನ್ನಕ್ಕಾಗಿ ಕಾಯುತ್ತಿರುವ ಜನರಿಗಾಗಿ ಮಾತ್ರವಲ್ಲದೆ, ತಮ್ಮ ತಾಯಿ ಮತ್ತು ತಂದೆಯನ್ನು ಕಳೆದುಕೊಂಡ ಅನೇಕ ಅಸಹಾಯಕ ಮಕ್ಕಳಿಗೂ ಆಸರೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಾವು ಓದಿ ತಿಳಿದುಕೊಳ್ಳಬಹುದು. ಕ್ರೈಸ್ತರಾಗಿರುವ ನಾವೊಬ್ಬೊಬ್ಬರೂ ಈ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಕರ್ತನು ನಮ್ಮ ಬಳಿ ನಿರೀಕ್ಷಿಸುತ್ತಿದ್ದಾರೆ. ಉಕ್ರೇನ್ (ಒಟ್ಟು ಜನಸಂಖ್ಯೆ 8 ಮಿಲಿಯನ್ ಜನರು) ರಷ್ಯಾ ಆಕ್ರಮಣದಿಂದಾಗಿ ಲಕ್ಷಾಂತರ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ ಮತ್ತು ಅನಾಥರಾಗಿದ್ದಾರೆ. ಸೊಮಾಲಿಯಾದಂತಹ ಅನೇಕ ಆಫ್ರಿಕನ್ ದೇಶಗಳಲ್ಲಿ ಕ್ಷಾಮವು ಅತಿರೇಕವಾಗಿದೆ, ಇದರ ಪರಿಣಾಮವಾಗಿ ಅಸಂಖ್ಯಾತ ಮಕ್ಕಳು ಅನಾಥರಾಗಿದ್ದಾರೆ. ಇದರಿಂದ ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗುವ ಮಕ್ಕಳು ಹಲವೆಡೆ ಇದ್ದಾರೆ. "ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು" ಎಂದು ಕೀರ್ತನೆಗಳಲ್ಲಿ ಓದುತ್ತೇವೆ.
ನಮ್ಮ ಕರ್ತನ ಮುಂದೆ ದೋಷವಿಲ್ಲದ ಶುದ್ಧವಾದ ಭಕ್ತಿ ಏನೆಂದು ಹೇಳಿರುವುದನ್ನು ನೋಡಿದ್ದೇವೆ. ದಿಕ್ಕಿಲ್ಲದವರು, ಬಡವರು ಮತ್ತು ಕೈಬಿಡಲ್ಪಟ್ಟವರ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸುವಂತೆ ಪರಿಶುದ್ಧ ಗ್ರಂಥವು ನಮ್ಮನ್ನು ಉತ್ತೇಜಿಸುತ್ತಿದೆ. ಸಮಾಜದಲ್ಲಿ ಅನಾಥರನ್ನು ಕಂಡಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ದಯೆ ತೋರಿಸಬೇಕು. ಅದಕ್ಕೆ ದೇವರು ನಮಗೆ ಸಹಾಯ ಮಾಡಲಿ.
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಪ್ರತಿ ಸೋಮವಾರ ಈ ಪತ್ರಿಕೆಯಲ್ಲಿ ಹೊರಬರುವ ಯೌವನಸ್ಥ ಹೆಣ್ಣು ಮಕ್ಕಳಿಗಾಗಿ ಎಂಬ ವಿಶೇಷ ಧ್ಯಾನದ ಮೂಲಕ ಅನೇಕ ಯೌವನಸ್ಥರು ಸ್ಪರ್ಶಿಸಲ್ಪಡಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482