By Village Missionary Movement
Thursday, 01-Sep-2022ಧೈನಂದಿನ ಧ್ಯಾನ(Kannada) – 02.09.2022
ಇತಿಹಾಸ ನಿರ್ಮಿಸಿದ ಸಾಮಾನ್ಯ ಜನರು
“ನಿನಗೆ ಎಲ್ಲಾ ಸಾಧ್ಯವಾಗಿದೆ; ನಿನಗೆ ಯಾವ ಆಲೋಚನೆಯೂ ತಡೆಯಲ್ಪಡುವದಿಲ್ಲವೆಂದು ತಿಳಿದಿದ್ದೇನೆ" - ಯೋಬ 42:2
ಎರಡನೆಯ ವಿಶ್ವ ಸಮರ ಕೊನೆಗೊಂಡಾಗ, ಒಬ್ಬ ಸೈನಿಕನಿಗೆ ಮನೆಗೆ ಹೋಗಲು ರಜೆ ನೀಡಲಾಯಿತು. ಅವನು ತನ್ನ ಮನೆಯ ಹತ್ತಿರದ ಬೀದಿಯನ್ನು ತಲುಪಿದನು. ಅಲ್ಲಿ ನಿಲ್ಲಿಸಿದ್ದ ಸೇನಾ ವಾಹನಗಳಿಗೆ ಮೃತದೇಹಗಳನ್ನು ತುಂಬಿರುವುದನ್ನು ನೋಡಿದಾಗ, ಶತ್ರುಗಳು ತಮ್ಮ ನಗರವನ್ನು ಬಾಂಬ್ ದಾಳಿ ಮಾಡಿದ್ದಾರೆ ಎಂದು ಅವರು ಅರ್ಥಮಾಡಿಕೊಂಡರು.
ಡಜನ್ ಲೆಕ್ಕದಲ್ಲಿ ಶವಗಳು ಸಾಮೂಹಿಕ ಸಮಾಧಿಗೆ ಕೊಂಡೊಯ್ಯಲು ಸಿದ್ಧವಾಗಿದ್ದವು. ಯೋಧ ಸ್ವಲ್ಪ ಹೊತ್ತು ನಿಂತು ನೋಡಿದ. ಆಗ ಇದ್ದಕ್ಕಿದ್ದಂತೆ ಒಂದು ಮಹಿಳೆಯ ಕಾಲಿನಲ್ಲಿದ್ದ ಶೂ ಅನ್ನು ಗಮನಿಸಿದರು. ಅದು ಕಳೆದ ಬಾರಿ ಹೆಂಡತಿಗೆ ತೆಗೆದುಕೊಟ್ಟಿದ್ದ ಪಾದರಕ್ಷೆಯಂತಿತ್ತು. ತಕ್ಷಣ ತನ್ನ ಮನೆಗೆ ಓಡಿದನು. ಮನೆಯಲ್ಲಿ ಯಾರೂ ಇರಲಿಲ್ಲ. ಅವರು ಬೇಗನೆ ಹಿಂತಿರುಗಿ ಬಂದು ವಾಹನದಲ್ಲಿದ್ದ ದೇಹವನ್ನು ಪರೀಕ್ಷಿಸಿದರು. ಅದು ತನ್ನ ಹೆಂಡತಿಯೇ ಎಂದು ತಿಳಿದು ಅಚ್ಚರಿಯಾಯಿತು. ನನ್ನ ಪತ್ನಿಯನ್ನು ಸಾರ್ವಜನಿಕ ಸಮಾಧಿಯಲ್ಲಿ ಹೂಳಲು ನನಗೆ ಇಷ್ಟವಿಲ್ಲ ನನ್ನ ಹೆಂಡತಿಯನ್ನು ಪ್ರತ್ಯೇಕ ಸಮಾಧಿಯಲ್ಲಿ ಹೂಳಲು ಬಯಸುತ್ತಿದ್ದೇನೆ ದಯವಿಟ್ಟು ಶವವನ್ನು ಕೊಡಿ ಎಂದು ಬೇಡಿಕೊಂಡನು. ಅನುಮತಿ ಸಿಕ್ಕಿತು.
ತುಂಬಾ ಕಷ್ಟಪಟ್ಟು ಶವವನ್ನು ವಾಹನದಿಂದ ಹೊರತೆಗೆಯುವಾಗ ಪತ್ನಿ ಜೀವಂತವಾಗಿರುವುದನ್ನು ಕಂಡು ಬೆಚ್ಚಿಬಿದ್ದನು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಆಕೆಗೆ ಅಗತ್ಯ ಚಿಕಿತ್ಸೆ ನೀಡಿ ಪುನಶ್ಚೇತನಗೊಳಿಸಲಾಯಿತು. ಈ ಘಟನೆ ನಡೆದ ಅನೇಕ ವರ್ಷಗಳ ನಂತರ, ಅಂದು ಇನ್ನೇನು ಜೀವಂತವಾಗಿ ಸಮಾಧಿಮಾಡಬೇಕೆಂದಿದ್ದ ಆ ಯೋಧನ ಹೆಂಡತಿ ಗರ್ಭಿಣಿಯಾದಳು. ಇವರಿಗೆ ಜನಿಸಿದ ಮಗುವೇ ಅಮೆರಿಕದ ಮಾಜಿ ಅಧ್ಯಕ್ಷರ ಪತ್ನಿ ಹಿಲರಿ ಕ್ಲಿಂಟನ್. ಹಿಲರಿ ಕ್ಲಿಂಟನ್ ಅವರು ತಾವು ಬರೆದ "Hard choices" ಎಂಬ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
ಆದ್ದರಿಂದಲೇ ಸಾಮಾನ್ಯ ಜನರೆಂದು ಪರಿಗಣಿಸಲ್ಪಟ್ಟ ಅನೇಕ ಜನರು ಇತಿಹಾಸವನ್ನು ಸೃಷ್ಟಿಸುವಂತೆ ಮಾಡಲು ದೇವರಿಂದ ಸಾಧ್ಯ. ಮರಕಡಿಯುವವನ ಮಗನಾದ ವಿಲಿಯಂ ಕೇರಿ ಭಾರತದ ಅನೇಕ ರಾಜ್ಯಗಳ ಕಣ್ಣು ತೆರೆಸಿದರು. ಅವರು ಹಗಲು ರಾತ್ರಿ ಜಾಗರಣೆಯಿದ್ದು ಅನೇಕ ಭಾಷೆಗಳಿಗೆ ಸತ್ಯವೇದವನ್ನು ಭಾಷಾಂತರಿಸಿದರು. ಅವರು ಅನೇಕ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ಸಾಮಾನ್ಯ ಮೀನುಗಾರನಾದ ಪೇತ್ರನು 3,000, 5,000 ಜನರ ಮನಸ್ಸನ್ನು ದೇವರ ಕಡೆಗೆ ತಿರುಗಿಸುವಂತಹ ಉತ್ತಮವಾದ ಬೋಧಕನೂ ಮುಖ್ಯ ಅಪೊಸ್ತಲನೂ ಆದನು.
ಪುಲ್ಲಲಕೋಟ್ಟೈ ಗ್ರಾಮದಲ್ಲಿ ದೇವರನ್ನು ಅರಿಯದ ಕುಟುಂಬದಲ್ಲಿ ಜನಿಸಿದ ಸಹೋದರ ಡೇವಿಡ್ ಗಣೇಶನ್ ಅವರು ನೂರಾರು ಮಿಷನರಿಗಳನ್ನು ನಿರ್ಮಿಸಿದ ಮಿಷನರಿ ಸಂಸ್ಥೆಯಾದ ವಿಲೇಜ್ ಮಿಷನರಿ ಮೂವ್ಮೆಂಟ್ನ ನಾಯಕರಾದರು. ಎಂಥಾ ಅದ್ಭುತ! ದೇವರ ಕಾರ್ಯಗಳು!
ಪ್ರೀತಿಯ ಕಣ್ಮಣಿಯೇ! ನೀನು ಸಾಮಾನ್ಯನಲ್ಲ. ನಿನ್ನನ್ನು ಅಸಾಧಾರಣವಾದ ಕೆಲಸಗಳನ್ನು ಮಾಡಬಲ್ಲ ಸಾಧಕನನ್ನಾಗಿ ಮಾಡುವುದು ದೇವರಿಗೆ ಸುಲಭ. ನಿಮ್ಮ ಆರಂಭ ಚಿಕ್ಕದಾಗಿದ್ದರೂ ಅಂತ್ಯವನ್ನು ಪರಿಪೂರ್ಣಗೊಳಿಸುವ ದೇವರು ನಿಮ್ಮೊಂದಿಗಿದ್ದಾರೆ. ಹಲ್ಲೇಲೂಯ
- Mrs. ಜಾಸ್ಮಿನ್ ಪಾಲ್
ಪ್ರಾರ್ಥನಾ ಅಂಶ:
ದೇವರು ನಮ್ಮ ಮಿಷನರಿಗಳೆಲ್ಲರನ್ನೂ ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482