By Village Missionary Movement
Monday, 12-Sep-2022ಧೈನಂದಿನ ಧ್ಯಾನ(Kannada) – 13.09.2022
ಮೋಸ ಹೋಗಬೇಡ
"ಆದರೆ ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ" - 1 ಥೆಸಲೊನೀಕ 5:21
ಕೆಲವು ದಿನಗಳ ಹಿಂದೆ ನಾನು ಚೆನ್ನೈನಲ್ಲಿ ವಾಸಿಸುತ್ತಿದ್ದ ನಕಲಿ ವಕೀಲರ ಬಗ್ಗೆ ಒಂದು ಸುದ್ದಿಯನ್ನು ಓದಿದ್ದೇನೆ. ಆಸಾಮಿ ವಕೀಲನೆಂದು 20 ವರ್ಷಗಳಿಂದ ತನ್ನ ಕುಟುಂಬಕ್ಕೆ ಮತ್ತು ಅನೇಕ ಜನರಿಗೆ ದ್ರೋಹ ಮಾಡಿದ್ದಾನೆ. ಒಂದು ದಿನ ಅವನ ನಕಲಿ ಬೆಳಕಿಗೆ ಬಂದಾಗ, ಅವನ ಮೇಲೆ ಅಪಾರ ನಂಬಿಕೆಯಿಟ್ಟಿದ್ದ ಅನೇಕರಿಗೆ ಭಾರಿ ನಿರಾಶೆಯಾಯಿತು. ಇದರಂತೆ ಕೆಲ ವರ್ಷಗಳ ಹಿಂದೆ ಅಮೆರಿಕದ ಖ್ಯಾತ ವೈದ್ಯರೊಬ್ಬರು ಡಾಕ್ಟರ್ ಎಂದೇ ಪರಿಗಣಿತರಾಗಿದ್ದವರು ಕಳ್ಳ ಎಂದು ಕಂಡುಹಿಡಿಯಲಾಯಿತು. ನಕಲಿ ವೈದ್ಯ ವಾಸಿಸುತ್ತಿದ್ದ ನಗರದ ಮೇಯರ್ ಅವನ ಬಗ್ಗೆ ಸುದ್ದಿ ಪ್ರಕಟಿಸಿದರು, "ಅವನು ಇಂಗ್ಲೆಂಡ್ನಿಂದ ತಪ್ಪಿಸಿಕೊಂಡು ನಮ್ಮ ನಗರದಲ್ಲಿ ಆಶ್ರಯ ಪಡೆದಿದ್ದಾನೆ." ವೈದ್ಯರ ಬಗ್ಗೆ ಒಳ್ಳೆ ಧೋರಣೆ ಹೊಂದಿದ್ದ ಜನರಿಗೆ ಈ ಸುದ್ದಿ ದೊಡ್ಡ ಆಘಾತವಾಗಿತ್ತು.
ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ, ಯೇಸು ಕ್ರಿಸ್ತನ ನಂತರ, ಅನೇಕರು ತಮ್ಮನ್ನು ತಾವು ಕ್ರಿಸ್ತನೆಂದು ಘೋಷಿಸಿದವರು ತಮ್ಮನ್ನು ತಾವು ಸ್ಥಾಪಿಸಲು ಬಯಸುವವರ ಬಗ್ಗೆ ನಾವು 5 ನೇ ಅಧ್ಯಾಯದಲ್ಲಿ ಓದುತ್ತೇವೆ. ಕರ್ತನಾದ ಯೇಸು ಸುವಾರ್ತೆಗಳಲ್ಲಿ ಹೇಳಿದಾಗ, "ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ" ಎಂದು ಹೇಳಿದರು. ಮತ್ತು ನಾನು ಕ್ರಿಸ್ತನು ಎಂದು ಅನೇಕರು ನಿಮ್ಮನ್ನು ಮೋಸಗೊಳಿಸುತ್ತಾರೆ ಎಂದು ಹೇಳುವುದನ್ನು ನಾವು ಸತ್ಯವೇದದಲ್ಲಿ ಓದುತ್ತೇವೆ. ಸೈತಾನನು ನಮ್ಮನ್ನು ನೇರವಾಗಿ ಮೋಸ ಮಾಡುವುದಿಲ್ಲ. ಬದಲಿಗೆ ಅತ್ಯಂತ ಕುತಂತ್ರದಿಂದ ಎಲ್ಲರನ್ನೂ ವಂಚಿಸುತ್ತಾನೆ. ಆತನ ವಂಚನೆಯಲ್ಲಿ ಸಿಕ್ಕಿಬಿದ್ದು ಅದಕ್ಕಾಗಿ ಮತ್ತೊಬ್ಬರನ್ನು ದೂಷಿಸುವುದರಲ್ಲಿ ಅರ್ಥವೇ ಇಲ್ಲ.
ನಾವು ಮಾತನಾಡುವ ಪ್ರತಿಯೊಬ್ಬರ ಮಾತುಗಳನ್ನು ನಂಬುವ ಬದಲು "ಸತ್ಯವೇದದಲ್ಲಿ ಏನು ಹೇಳಲಾಗಿದೆ" ಎಂಬುದನ್ನು ಓದಲು ಮತ್ತು ಸತ್ಯವೇದದ ಬೆಳಕಿನಲ್ಲಿ ವಿವೇಚಿಸಲು ನಾವು ಅಭ್ಯಾಸ ಮಾಡಿಕೊಳ್ಳಬೇಕು. "ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇದ್ದೇ ಇರುತ್ತಾರೆ" ಎಂದು ಹೇಳುವ ಮಾತನ್ನು ಕೇಳಿರುತ್ತೇವೆ. ಪ್ರಿಯರೇ, ಇಂದಿನ ಸತ್ಯವೇದ ಭಾಗದಲ್ಲಿ, ಅಪೊ. ಪೌಲನು ತನ್ನ ಪತ್ರಿಕೆಗಳಲ್ಲಿ ಬರೆಯುವುದನ್ನು ಮುಂದುವರಿಸುತ್ತಾ, "ಎಲ್ಲವನ್ನೂ ಶೋಧಿಸಿ ನೋಡಿರಿ, ಒಳ್ಳೆಯದನ್ನು ಹಿಡಿದುಕೊಳ್ಳಿರಿ" ಎಂದು ಹೇಳುತ್ತಾರೆ. ಸೈತಾನನ ತಂತ್ರಗಳಿಗೆ ಬಲಿಯಾಗದಂತೆ ಜಾಗರೂಕರಾಗಿರಿ ಎಂದು ದೇವರು ಇಂದು ಪವಿತ್ರಾತ್ಮದ ಮೂಲಕ ನಮಗೆ ಸೂಚಿಸುತ್ತಿದ್ದಾರೆ. ಜಾಗರೂಕರಾಗಿರಲು ದೇವರು ನಮಗೆ ಸಹಾಯ ಮಾಡಲಿ.
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಪ್ರತಿ ಜಿಲ್ಲೆಯಲ್ಲೂ 300 ಗಿದ್ಯೋನ್ಗಳು (ಯುವಕರು) ಎದ್ದೇಳುವಂತೆ ಪ್ರಾರ್ಥಿಸಿರಿ, ಇವರು ಒಂದು ಗಂಟೆ ಪ್ರಾರ್ಥನೆ ಮಾಡುವವರಾಗಿಯೂ ಮತ್ತು ಒಂದು ಗಂಟೆಗಳ ಕಾಲ ಕಾರ್ಯ ನಿರ್ವಹಿಸುವವರಾಗಿಯೂ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482