By Village Missionary Movement
Saturday, 19-Aug-2023ಧೈನಂದಿನ ಧ್ಯಾನ(Kannada) – 19.08.2023
ನನ್ನ ಮನೆ ತುಂಬುವಂತೆ…
"...ಇನ್ನೂ ಸ್ಥಳವದೆ… ನನ್ನ ಮನೆ ತುಂಬಿಕೊಳ್ಳುವಂತೆ ಒಳಗೆ ಬರಲು ಅವರನ್ನು ಬಲ ವಂತಮಾಡು" - ಲೂಕ 14:22,23
ಇಂದಿನ ಸತ್ಯವೇದಭಾಗದಲ್ಲಿ, ಒಬ್ಬಾನೊಬ್ಬ ಮನುಷ್ಯನು ಒಂದು ದೊಡ್ಡ ಔತಣಮಾಡಿಸಿ ಅನೇಕರನ್ನು ಕರೆದನು. ಔತಣದ ಸಮಯವಾದಾಗ ಕರೆಯಲ್ಪಟ್ಟವರು ನೆವ ಹೇಳಲಾರಂಭಿಸಿದರು. ಒಬ್ಬನು ಭೂಮಿಯನ್ನು ಕೊಂಡುಕೊಂಡಿದ್ದೇನೆ, ಹೋಗಿ ಅದನ್ನು ನೋಡುವದು ಅವಶ್ಯವಾಗಿದೆ ಎಂದನು. ಬೇರೊಬ್ಬನು-- ನಾನು ಎತ್ತುಗಳನ್ನು ಕೊಂಡುಕೊಂಡಿ ದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕಾಗಿ ಹೋಗಬೇಕು ಎಂದು ಹೋಗಲು ನಿರಾಕರಿಸಿದನು. ಇನ್ನೊಬ್ಬನು - ನಾನು ಮದುವೆಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಬರುವದಕ್ಕಾಗುವದಿಲ್ಲ ಅಂದನು. ಆದರೆ ಆ ಯಜಮಾನನಿಗೆ ಹೇಗಾದರೂ ನನ್ನ ಮನೆ ಜನರಿಂದ ತುಂಬಬೇಕು ಎಂಬುದೇ. ಆದ್ದರಿಂದ ಸಿಟ್ಟುಗೊಂಡು ಆಳಿಗೆ - ನೀನು ತಟ್ಟನೆ "ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು ಊನವಾದವರು ಕುರುಡರು ಕುಂಟರು ಇಂಥವರನ್ನು ಇಲ್ಲಿಗೆ ಕರಕೊಂಡು ಬಂದು ನನ್ನ ಮನೆಯನ್ನು ತುಂಬಿಸು" ಎಂದು ಹೇಳಿದನು.
ಇಂದು ನಮ್ಮ ಕರ್ತನಾದ ಯೇಸುಕ್ರಿಸ್ತನ ಮನಸ್ಥಿತಿಯೂ ಇದೇ ರೀತಿ ಇದೆ, ಪರಲೋಕವನ್ನು ತನ್ನ ಜನರಿಂದ ತುಂಬಿಸಬೇಕೆಂದು! ಆದರೆ 2000 ವರ್ಷಗಳ ನಂತರವೂ ಈ ಸ್ಥಳವು ಇನ್ನೂ ಖಾಲಿಯಾಗಿದೆ. ಆದ್ದರಿಂದ ಕ್ರಿಸ್ತನನ್ನು ಅಂಗೀಕರಿಸಿರುವ ನಮ್ಮಲ್ಲಿ ಪ್ರತಿಯೊಬ್ಬರೂ ಖಾಲಿಯಿರುವ ಸ್ಥಳವನ್ನು ತುಂಬಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.
ಆ ದೇವರ ಚಿತ್ತವನ್ನು ಪೂರೈಸಲು ನೀವು ಏನು ಮಾಡಲಿದ್ದೀರಿ? ಇಷ್ಟೆಲ್ಲಾ ಪ್ರಾರ್ಥಿಸುತ್ತಿದ್ದೇನೆ, ಇಷ್ಟೊಂದು ಸೇವೆ ಮಾಡುತ್ತಿದ್ದೇನೆ, ಇಷ್ಟೊಂದೆಲ್ಲಾ ಮಾಡುತ್ತಿದ್ದೇನೆ ಎಂದು ತೃಪ್ತರಾಗಿದ್ದೇವೆಯೇ? ನಾವು ಕ್ರೈಸ್ತರನ್ನೇ ಕ್ರೈಸ್ತರನ್ನಾಗಿ ಪರಿವರ್ತಿಸಲು ಕೆಲಸ ಮಾಡುತ್ತಿದ್ದೇವೆಯೇ? ಕ್ರೈಸ್ತರಿಗೆ ಶಕ್ತಿ ಶಿಬಿರಗಳು ಮತ್ತು ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದೇವೆ. ನಮ್ಮ ಟಿ.ವಿ. ಕಾರ್ಯಕ್ರಮಗಳಲ್ಲಿಯೂ ಕ್ರೈಸ್ತರಿಗೇ 90% ಸಮಯವನ್ನು ನೀಡುತ್ತಿದ್ದೇವೆ. ನಾವು ಮಾಡುವ ಎಲ್ಲವೂ ಒಳ್ಳೆಯದೇ. ನಾವು ಇಲ್ಲಿಯವರೆಗು ಮಾಡಿದ ಸೇವೆಯಲ್ಲಿ, ನಮಗೆ ಮತ್ತು ಕ್ರೈಸ್ತರಿಗೆ ಮಾತ್ರವೇ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಆದರೆ ನಾವು ಮಾಡಿದ ಸೇವೆಯಿಂದ ಸ್ಥಳ ತುಂಬಿಲ್ಲವೇ? ಇಗೋ ನಮ್ಮ ಯೋಜನೆಯನ್ನು, ದರ್ಶನವನ್ನು ಮತ್ತು ಪ್ರಯತ್ನವನ್ನು ಬದಲಾಯಿಸಿ ಬೇರೆ ಯೋಜನೆಯನ್ನು ದೇವರೇ ಕೊಡುತ್ತಿದ್ದಾರೆ. ಏನದು ಗೊತ್ತಾ? ಲೂಕ 14:23 ನೇ ವಾಕ್ಯದ ಪ್ರಕಾರ, ಮುಖ್ಯ ರಸ್ತೆಗಳು, ಸಂದಿಗಳು, ಬೀದಿಗಳು, ಆಸ್ಪತ್ರೆಗಳು ಹೀಗೆ ಹೋಗಿ ಸುವಾರ್ತೆ ಹೇಳಿ ದೇವರ ಔತಣದ ಮನೆಯನ್ನು ಜನರಿಂದ ತುಂಬೋಣ.
ಪ್ರಿಯರೇ! ನಮ್ಮ ದೇವರು ಬರಿದಾದ ಎಲ್ಲವನ್ನೂ ತುಂಬಿಸುವಾತನು. ಹಾಗಾಗಿ ಪರಲೋಕವು ಸಂಪೂರ್ಣವಾಗಿ ತುಂಬಬೇಕೆಂದು ದೇವರು ಬಯಸುತ್ತಿದ್ದಾರೆ. "ಇನ್ನೂ ಸ್ಥಳವಿದೆ" ಎಂದು ಹೇಳುತ್ತಿದ್ದಾರೆ. ಬರಿದಾಗಿರುವ ಸ್ಥಳವನ್ನು ತುಂಬಲು ನೀವು ಕಾರ್ಯನಿರ್ವಹಿಸುತ್ತೀರಾ?
- Bro. K. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಸಹಸೇವಕರು ಮತ್ತು ಅವರು ಸೇವೆ ಸಲ್ಲಿಸುವ ಹಳ್ಳಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482