Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.01.2024
Share:

By Village Missionary Movement

Monday, 15-Jan-2024

ಧೈನಂದಿನ ಧ್ಯಾನ(Kannada) – 15.01.2024

 

ಸಣ್ಣ ಬೀಜಗಳು

 

"ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ" - ಮಾರ್ಕ 4:14

 

ಆಲದ ಬೀಜವು ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿದ್ದರೂ, ಅದು ಮೊಳಕೆಯೊಡೆದು ದೊಡ್ಡ ಆಲದ ಮರವಾಗುತ್ತದೆ. ಅದೇ ರೀತಿ ಸತ್ಯವೇದದಲ್ಲಿ ಕೆಲವರು ಮಾಡಿದ ಸಣ್ಣ ಕಾರ್ಯಗಳು ದೊಡ್ಡ ಉಜ್ಜೀವನವನ್ನು, ರಕ್ಷಣೆಯನ್ನು ಮತ್ತು ವಿಮೋಚನೆಯನ್ನು ತಂದದ್ದನ್ನು ಇಂದು ನೋಡೋಣ.

 

1) ಅರಾಮ್ಯರು, ಸಮಾರ್ಯಕ್ಕೆ ಮುತ್ತಿಗೆ ಹಾಕಿದಾಗ ಪಟ್ಟಣದಲ್ಲಿ ಘೋರವಾದ ಬರವಿತ್ತು. ದೇವರು ಕಾರ್ಯಮಾಡಿದ್ದರಿಂದಾಗಿ, ಶತ್ರು ಸೈನ್ಯವು ಸಮಾರ್ಯದಿಂದ ಓಡಿಹೋಯಿತು. ಅರಾಮ್ಯರ ಪಾಳೆಯದೊಳಗೆ ಪ್ರವೇಶಿಸಿದ ನಾಲ್ಕು ಕುಷ್ಠರೋಗಿಗಳು ಡೇರೆಯನ್ನು ಹೊಕ್ಕು ಉಂಡು ಕುಡಿದು ಅದರಲ್ಲಿದ್ದ ಬೆಳ್ಳಿಬಂಗಾರವನ್ನೂ ಬಟ್ಟೆಗಳನ್ನೂ ತೆಗೆದುಕೊಂಡು ಹಸಿವು ತೀರಿಸಿಕೊಂಡರು. ಈ ಶುಭವಾರ್ತೆಯನ್ನು ಅರಮನೆಯವರಿಗೆ ತಿಳಿಸಲು ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು ಎಂದು ಅವರು ಗ್ರಹಿಸಿ, ತ್ವರಿತವಾಗಿ ಆ ಶುಭವಾರ್ತೆಯನ್ನು ಅರಮನೆಯವರಿಗೆ ತಿಳಿಸಿದರು. ಸಮಾಜದಿಂದ ಬಹಿಷ್ಕೃತರಾದ ಅವರು ಯಾವುದಕ್ಕೂ ಹೆದರಲಿಲ್ಲ. (2 ಅರಸು 7:1-16)

 

2) ಅರಸನಾದ ಅಹಾಬನ ಉಗ್ರಾಣಿಕನಾದ ಓಬದ್ಯನು ತನ್ನ ಪ್ರಾಣಕ್ಕೆ ಆಪತ್ತು ಎಂದಾಗಲೂ ಅಹಾಬನು ಮತ್ತು ಎಲೀಯನು ಭೇಟಿಯಾಗುವಂತೆ ಮಾಡಿದನು. ಇದರ ಪರಿಣಾಮವಾಗಿ ಕರ್ಮೆಲಿನ ಪರ್ವತದಲ್ಲಿ ಇಸ್ರಾಯೇಲ್ಯರ ಮಧ್ಯದಲ್ಲಿ ಒಂದು ದೊಡ್ಡ ಉಜ್ಜೀವನ ಏರ್ಪಟ್ಟಿತು. (1 ಅರಸುಗಳು 18:1-39)

 

3) ಪೌಲನು ಮತ್ತು ಇತರ ಕೈದಿಗಳು ಇತಾಲ್ಯ ದೇಶಕ್ಕೆ ಪ್ರಯಾಣಿಸುತ್ತಿದ್ದಾಗ, ಹಡಗು ಹಾನಿಗೊಳಗಾಗುವ ಸಂದರ್ಭದಲ್ಲಿ ಪೌಲನು ದೇವರ ವಾಕ್ಯಗಳನ್ನು ಹೇಳಿ ಹಡಗಿನಲ್ಲಿದ್ದ 276 ಜನರನ್ನು ಬಲಪಡಿಸಿ ಎಲ್ಲರೂ ತಪ್ಪಿಸಿಕೊಂಡು ಬದುಕುಳಿಯಲು ಉಪವಾಸವಿರುವವರು ಊಟ ಮಾಡಿ ಬಲಗೊಳ್ಳಬೇಕೆಂದು ಹೇಳಿ ತಾನೂ ಊಟಮಾಡಿ ಅನೇಕರನ್ನು ಉತ್ಸಾಹಗೊಳಿಸಿ ಊಟ ಮಾಡುವಂತೆ ಮಾಡಿದನು. ಕೊನೆಗೆ, ಎಲ್ಲರೂ ಮೆಲೀತೆದ್ವೀಪಕ್ಕೆ ಸೇರಿದರು. ಆ ದ್ವೀಪಕ್ಕೆ ಸುವಾರ್ತೆ ತಲುಪಿತು. 

 

ಪ್ರಿಯರೇ! ನನ್ನಿಂದ ದೇವರಿಗೆ ಏನು ಮಾಡಲು ಸಾಧ್ಯ ಎಂಬ ಕೀಳು ಮನೋಭಾವನೆಯಿಂದ ಇರದೆ ನಾಲ್ಕು ಕುಷ್ಠರೋಗಿಗಳಂತೆ ಯೇಸು ನಮಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ನಮ್ಮ ದೇಶದವರಿಗೆ ಶುಭವಾರ್ತೆಯಾಗಿ ಸಾರಬಹುದೇ. ಓಬದ್ಯನ ಹಾಗೆ ಒಂದು ಸ್ಥಳದಲ್ಲಿ ಬಲವಾದ ಉಜ್ಜೀವನ ಉಂಟಾಗಲು ಒಂದು ಸೇವಕರನ್ನು ಉಪಯೋಗಿಸಬಹುದೇ. ಬದುಕುತ್ತೇವೆ ಎಂಬ ನಂಬಿಕೆಯಿಲ್ಲದ ಸ್ಥಿತಿಯಲ್ಲಿ ಇರುವವರನ್ನು ದೇವರ ವಾಕ್ಯಗಳಿಂದ ಧೈರ್ಯಪಡಿಸಿ ಅವರು ಮಾಡಬೇಕಾದದ್ದನ್ನು ಮಾಡುವಂತೆ ಪ್ರೋತ್ಸಾಹಿಸಬಹುದೇ! ನೀವು ಮೇಲ್ಕಂಡ ವ್ಯಕ್ತಿಗಳಂತೆ ಕಣ್ಣೀರಿನ ಪ್ರಾರ್ಥನೆಯೊಂದಿಗೆ, ಯಾವುದಾದರೂ ಒಂದು ಚಿಕ್ಕ ಕಾರ್ಯದ ಮೂಲಕ ದೇವರವಾಕ್ಯಗಳನ್ನು ಬಿತ್ತಿದರೆ ಸುಗ್ಗಿಯ ಯಜಮಾನನಾದ ಉನ್ನತವಾದ ದೇವರು ದೊಡ್ಡ ಸುಗ್ಗಿಯನ್ನು ಆಜ್ಞಾಪಿಸುತ್ತಾರೆ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಪ್ರಾರಂಭಿಸಲಿರುವ ಹೊಸ ಶಾಲೆಗಾಗಿ, ಅದರ ಸಿದ್ಧತೆ ಕಾರ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino